Sunday, October 28, 2012

ಆಧ್ಯಾತ್ಮಿಕ ಪರಂಪರೆ

ಆಧ್ಯಾತ್ಮಿಕ  ಪರಂಪರೆ

 ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎನ್ನುವುದು ನಿಜವಾದರೂ, ನಿಯಂತ್ರಣ ಅಸಾಧ್ಯವೇನಲ್ಲ. ನಮ್ಮದು ಸ್ವಭಾವತಃ ಧರ್ಮಿಕ, ಆಧ್ಯಾತ್ಮಿಕ ಚಿಂತನೆಯ  ದೇಶ. ಈ ದೇಶವನ್ನು ಆಳಿದ  ರಾಜ ಮಹಾರಾಜರು, ಆಧ್ಯಾತ್ಮಿಕ ಚಿಂತಕರನ್ನು ಗುರುವಾಗಿ ಸ್ವೀಕರಿಸಿದ ಪರಂಪರೆ ನಮ್ಮದು. ಶ್ರೀರಾಮನಿಗೆ ವಸಿಷ್ಠರು, ಶಿವಾಜಿಗೆ ರಾಮದಾಸರು, ಹುಕ್ಕಬುಕ್ಕರಿಗೆ ವಿದ್ಯಾರಣ್ಣರು- ಹೀಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಾಧಕರು ದೇಶಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಧರ್ಮದ ನೆಲೆಯಲ್ಲಿ  ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ ಪವಿತ್ರ ಪರಂಪರೆ ಇಲ್ಲಿಯದು.

                  ಹೀಗಿದ್ರೂ  ಭ್ರಷ್ಟಾಚಾರದಲ್ಲಿ ದೇಶ ಮುಂಚೂಣಿಯಲ್ಲಿರುವುದು ದುರದೃಷ್ಟಕರ. ಆಧ್ಯಾತ್ಮದ ಕಡಗಣನೆಯೇ ಇದಕ್ಕೆ ಕಾರಣ. ಶಿಕ್ಷಣ ಕ್ಷೇತ್ರದಲ್ಲಿ ಆಧ್ಯಾತ್ಮ ಎಂದರೆ ಕಮ್ಯುನಲ್ ಎನ್ನುವ ಕೆಟ್ಟ ಚಿಂತನೆಗಳು ನಮ್ಮ ಜನಪ್ರತಿನಿಧಿಗಳಲ್ಲಿ ಹುಟ್ಟಿದ್ದೇ ಅನಾಹುತಗಳಿಗೆ ಕಾರಣ. ಭ್ರಷ್ಟಾಚಾರವು ಮಹಾ ಪಾಪ ಎನ್ನುವ ತಿಳಿವಳಿಕೆ ಬರಬೇಕು. ಧರ್ಮ ಗುರುಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು.

No comments:

Post a Comment