Monday, October 29, 2012

ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆನಿಂತಿದೆ

 ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆ ನಿಂತಿದೆ

ಅಂದು ರಾಷ್ತ್ರೀಯ ಭಾವನೆ ಸಮಾಜದಲ್ಲಿ ಸದಾ ಜಾಗೃತ ಸ್ಥಿತಿಯಲ್ಲಿತ್ತು. ಬದುಕಿನಲ್ಲಿ ಒಂದು ಆದರ್ಶವಿತ್ತು. ನೀತಿ, ಮೌಲ್ಯ, ಚಾರಿತ್ರ್ಯರಹಿತ ಬದುಕು ಬದುಕಲ್ಲ ಎಂಬ ಎಚ್ಚರಿಕೆ ಇತ್ತು. ಆದರೀಗ ಪಾಶ್ಚಾತ್ಯ ಅಂಧಾನುಕರಣೆ, ಸಗಟು ಮತಗಳಿಗಾಗಿ ತುಷ್ಟ್ಟೀಕರಣದ ಮೂಲಕ ಸಮಾಜವನ್ನು ಒಡೆಯುವ ವಿಭಜನಕಾರಿ ರಾಜಕೀಯ, ಭೋಗವಾದದಿಂದಾಗಿ ಸಮಾಜದಲ್ಲಿ ಅಶಾಂತಿ, ಅನೈತಿಕತೆ, ಸ್ವಾರ್ಥ ವಿಜೃಂಭಿಸುವಂತಾಗಿದೆ.

         ’ಪ್ರಗತಿಪರ ಬಳಕೆ ಸಿದ್ದಾಂತ’ ಪ್ರತಿಪಾದಕ ಡಾ. ರವಿ ಭಾತ್ರಾ ಹೇಳುವಂತೆ, ದೇಶದಲ್ಲಿ ಮಾನವ ಸಂಪನ್ಮೂಲ ಸೇರಿದಂತೆ ಎಲ್ಲಾ ರೀತಿಯ ಸಂಪತ್ತೂ ಇದೆ. ಆದರೆ ಆಧ್ಯಾತ್ಮ ರಹಿತವಾಗಿ ಭೋಗಪ್ರಧಾನ ಭೌತಿಕವಾದದಿಂದ ಜನಜೀವನ ಉಸುಕಿನ ಮೇಲೆ ಕಟ್ಟಿದ ಕಟ್ಟಡದಂತಾಗಿಬಿಟ್ಟಿದೆ.
     
       ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆ ನಿಂತಿದೆ. ಇದು ಭೋಗಭೂಮಿಯಲ್ಲ, ತ್ಯಾಗ ಭೂಮಿ. ಇಂದು ವಿವ್ಯುನ್ಮಾನ ಮಾಧ್ಯಮ, ಚಲನಚಿತ್ರ, ಶಿಕ್ಷಣ, ರಾಜಕೀಯ ಸೇರಿದಂತೆ ಎಲ್ಲಾ ರಂಗಗಳಲ್ಲಿ ಅನೈತಿಕತೆಯೇ ವಿಜೃಂಭಿಸುತ್ತಿದೆ.

     ಅಹಂ ಬಿಟ್ಟುಬಿಡೋಣ ಪರಂಪರಾಗತವಾಗಿ ಬಂದಿರುವ ಸಂಪ್ರದಾಯ, ರಿವಾಜುಗಳು ಮನೆಯೊಳಗಿರಲಿ. ಸಂಸ್ಕಾರದಲ್ಲಿ ಯೋಗ್ಯ ಹಿಂದುವಾಗಿರೋಣ, ರಾಷ್ಟ್ರೀಯತೆಯಲ್ಲಿ ಭಾರತೀಯರಾಗಿರೋಣ! ಎಲ್ಲರೊಂದಿಗೆ ಬೆರೆಯುವಾಗ ವಿಶ್ವಮಾನವನಾಗಿರೋಣ.

No comments:

Post a Comment