Wednesday, April 3, 2013

ಆಹ್ವಾನ

ಆಹ್ವಾನ
--------
ಒಮ್ಮೊಮ್ಮೆ ಮಂಜು ಮುಸುಕಿನ
ಮುಂಜಾವಿನಲಿ ತಂಗಾಳಿ ಬೀಸುವಾಗ
ಮನದೊಳಗೆ ಚಿಗುರಿದ ಕವಿತೆ
ಮಾಯವಾಗಿ ವಿದಾಯ ಹೇಳುವ
ಕನಸುಗಳು ಬೀಳುತ್ತವೆ.

ಸುಡು ಬಿಸಿಲ
ಸೂರ್ಯನ ಕಿರಣಕ್ಕೆ
ಹೃದಯ ಮರುಟಿ
ಭಾವನೆ ಸ್ತಬ್ಧವಾದಾಗ
ನನ್ನ ಪ್ರೀತಿಯ ಪ್ರೇಮ
ಹೊತ್ತಿ ಉರಿಯುತ್ತದೆ.

ಮುಸ್ಸಂಜೆ ಹೊತ್ತಿನಲ್ಲಿ
ಪಶ್ಚಿಮದ ದಿಗಂತದಲ್ಲಿ
ಸೂರ್ಯನ ಕೆಂಬಣ್ಣ
ಸಾಗರದ ತುಂಬಾ ಚೆಲ್ಲುತ್ತಿರುವಾಗ
ಹೊರ ಹೊಮ್ಮುವ ಜುಳುಜುಳು ನೀನಾದಗಳು
ನನ್ನೊಳಗಿನ ಭಾವನೆಗಳಿಗೆ
ಲಯಬದ್ಧವಾದ ಶೃತಿಮಿಡಿಯುವ
ನೆನಪುಗಳು ಕಾಡುತ್ತವೆ.

ರಾತ್ರಿಯ ನೀರವತೆಯಲ್ಲಿ
ನನ್ನೀ ಮನದ ತೊಳಲಾಟಕ್ಕೆ
ಸಾಂತ್ವನ ಹೇಳಿ
ಮರುದಿನದ ಮುಂಜಾವಿಗೆ
ಕಾತರದ ಆಹ್ವಾನವೀಯುತ್ತದೆ.

No comments:

Post a Comment